ಆಸ್ತಿ ನೀಡಲ್ಲ ಎಂದ ತಂದೆಯನ್ನೇ ಸಾಯಿಸಿದ ಮಗ

ಶುಕ್ರವಾರ, 4 ಜನವರಿ 2019 (08:03 IST)
ಬಾಗಲಕೋಟೆ : ಆಸ್ತಿಗಾಗಿ ಮಗ ತಂದೆಯನ್ನೇ ಕೊಡಲಿಯಿಂದ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.


ಮಲ್ಲಿಕಾರ್ಜುನ(65) ಮೃತ ತಂದೆ. ಶರಣಪ್ಪ ತಂದೆಯನ್ನು ಕೊಂದ ಪಾಪಿ ಮಗ. ಆಸ್ತಿ ವಿಚಾರಕ್ಕೆ ಆಗಾಗ ತಂದೆ ಹಾಗೂ ಮಗನ ನಡುವೆ ಜಗಳವಾಗುತ್ತಿತ್ತು. ಆದರೆ ಗುರುವಾರದಂದು ಜಗಳವಾದಾಗ ತಂದೆ ಮಗನಿಗೆ ಆಸ್ತಿ ನೀಡಲ್ಲ ಎಂದು ಹೇಳಿದ್ದಾರೆ.


ಇದರಿಂದ ಕೋಪಗೊಂಡ ಮಗ ಸಿಲಿಂಡರ್ ಹಾಗೂ ಕೊಡಲಿಯಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮೇಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ