ಪತಿ ಗಲಾಟೆ ಮಾಡುತ್ತಾನೆ ಎಂದು ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ!

ಭಾನುವಾರ, 10 ಜುಲೈ 2022 (11:29 IST)
ಮಂಡ್ಯ : ಪ್ರಿಯಕರನ ಜೊತೆ ಸೇರಿ ಪತಿಯನ್ನು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿಸಿ, ಅಮಾಯಕಿ ಎನ್ನುವ ರೀತಿಯಲ್ಲಿ ಡ್ರಾಮಾ ಮಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಗೌರಿ ಕೊಲೆ ಮಾಡಿದ ಆರೋಪಿ. ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ತಲಕಾಡು ಫೈಲ್ನ ನಿವಾಸಿ. ಈಕೆ ತನ್ನ ಪತಿ ಸುಂದರ್ ರಾಜ್ನನ್ನು ಇದೇ ತಿಂಗಳ 2ರಂದು ಕೆಆರ್ಎಸ್ ಹೊರವಲಯದಲ್ಲಿರುವ ಹುಲಿಕೆರೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಳು. ಆದರೆ ಪೊಲೀಸರು ಸುಂದರ್ ರಾಜ್ ಕೊಲೆಯ ವಿಷಯವನ್ನು ತಿಳಿಸಿದಾಗ ಹೈಡ್ರಾಮಾವನ್ನೇ ಮಾಡಿದ್ದಳು.

ಅಷ್ಟೇ ಅಲ್ಲದೇ ಮಾಧ್ಯಮಗಳ ಮುಂದೆ ಆಕೆ, ನನ್ನ ಗಂಡ ನಿನ್ನೆ ಮನೆಗೆ ಬಂದಿದ್ದ. ಅದಾದ ನಂತರ ಮನೆಗೆ ಬಂದಿಲ್ಲ. ಇದೀಗ ನನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ. ಆತನನ್ನು ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ನನ್ನ ಗಂಡನಿಗೆ ಯಾರು ಶತ್ರುಗಳು ಇರಲಿಲ್ಲ ಎಂದು ಕಣ್ಣೀರು ಹಾಕಿದ್ದಳು. 

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆ ವೇಳೆ ಗೌರಿಯ ಪ್ರಿಯಕರ ಪರಮೇಶ್ಚಾರಿಯನ್ನು ವಿಚಾರಣೆ ನಡೆಸುತ್ತಾರೆ. ಆ ಬಳಿಕ ಇವರಿಗೆ ಸುಂದರ್ ರಾಜ್ನನ್ನು ಕೊಲೆ ಮಾಡಿರುವುದು ಅಮಾಯಕಿಯಂತೆ ನಟಿಸುತ್ತಿರುವ ಪತ್ನಿ ಗೌರಿ ಎಂದು ತಿಳಿದುಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ