ಕಾಲೇಜ್ ಹಿಂದಿನ ನೀಲಗಿರಿ ತೋಪಿನಲ್ಲಿ ನಡೆಯಿತು ಆ ಕೆಲಸ

ಶುಕ್ರವಾರ, 16 ಆಗಸ್ಟ್ 2019 (19:46 IST)
ಕಾಲೇಜೊಂದರ ಹಿಂಬದಲ್ಲಿರೋ ನೀಲಗಿರಿ ತೋಪಿನಲ್ಲಿ ಆಗಬಾರದ ಕೆಲಸ ಆಗಿದೆ.

ಯಾರೂ ಇಲ್ಲದ ಸಮಯದಲ್ಲಿ ಕಾಲೇಜಿನ ಹಿಂದಿನ ಪ್ರದೇಶದಲ್ಲಿರೋ ನೀಲಗಿರಿ ಗಿಡಗಳಿರೋ ಜಾಗಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಿ.ಕಾಂ ಪ್ರಥಮ ವರ್ಷ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ಮಹಾದೇವಸ್ವಾಮಿ ಅನ್ನೋನು ವಿಷ ಕುಡಿದಿದ್ದಾನೆ.
ಮಂಡ್ಯದ ಶಾಂತಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಯಾವ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿಲ್ಲ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ