ಅಧಿವೇಶನದಲ್ಲಿ ಗೈರಾಗುವ ಪ್ರಶ್ನೆಯೇ ಇಲ್ಲವೆಂದ ಶಾಸಕ

ಶನಿವಾರ, 24 ನವೆಂಬರ್ 2018 (18:46 IST)
ಅಧಿವೇಶನದಲ್ಲಿ ಗೈರಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕರೊಬ್ಬರು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಮಹೇಶ್ ಕುಮಠಳ್ಳಿ ಹೇಳಿಕೆ ನೀಡಿದ್ದು, ಬೆಳಗಾವಿ ಅಧಿವೇಶನದಲ್ಲಿ ಅಥಣಿ ಮತಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ನನಗೆ ಕಲಾಪದಿಂದ ಹೊರಗುಳಿಯುವಂತೆ ಯಾರೂ ಹೇಳಿಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ ಜಾರಕಿಹೊಳಿ ಅವರೇ ನಮ್ಮ ನಾಯಕರು, ಮತಕ್ಷೇತ್ರ ಹೊರತುಪಡಿಸಿ ಬೇರಾವ ಪ್ರಶ್ನೆಗಳಿಗೆ ಉತ್ತರಿಸುವದಿಲ್ಲ. ಕಲಾಪಕ್ಕೆ ಗೈರಾಗುವ ಪ್ರಶ್ನೆಯೇ ಇಲ್ಲ ಎಂದು ಅಥಣಿ  ಶಾಸಕ ಮಹೇಶ್ ಕುಮಠಳ್ಳಿ ನಂದಗಾಂವ್ ಗ್ರಾಮದಲ್ಲಿ ಹೇಳಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ