ಚಂದ್ರಗ್ರಹಣವನ್ನೇ ಲಾಭ ಮಾಡಿಕೊಂಡ ಕಳ್ಳರು!

ಶನಿವಾರ, 28 ಜುಲೈ 2018 (14:50 IST)
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮನೆಯಿಂದ ಯಾರೂ ಹೊರಬರುವುದಿಲ್ಲ ಎಂದು ಅರಿತು ಅದನ್ನೇ ಕಳ್ಳರು ಲಾಭಮಾಡಿಕೊಂಡಿದ್ದಾರೆ. ಗ್ರಹಣದ ದಿನವೇ ದೇವಾಲಯದಲ್ಲಿ ಕಳವು ಮಾಡಲಾಗಿದೆ.

ಚಂದ್ರಗ್ರಹಣವನ್ನೇ ಲಾಭವನ್ನಾಗಿ ಮಾಡಿಕೊಂಡ ಕಳ್ಳರು ದೇವಾಲಯದ ಬಾಗಿಲು ಮುರಿದು ಕಳವು ಮಾಡಿದ್ದಾರೆ. ಮಂಡ್ಯ ಜಿಲ್ಲೆಯ
ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀದೇವಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿಯಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರುವುದಿಲ್ಲ ಎಂದು ದೇವಾಲಯದಲ್ಲಿ ಕಳವು ಮಾಡಲಾಗಿದೆ.

ಚಿನ್ನಾಭರಣ, ಹುಂಡಿಯ ಹಣ ಕಳವು ಮಾಡಿ ಖದೀಮರು ಪರಾರಿಯಾಗಿದ್ದಾರೆ. ಲಕ್ಷ್ಮೀದೇವಿ ವಿಗ್ರಹದ ಬೆಳ್ಳಿ ಕಣ್ಣು, ಮೂರು ಚಿನ್ನದ ತಾಳಿ, 2 ಹುಂಡಿಯಲ್ಲಿದ್ದ ಹಣ ಕಳವು ಮಾಡಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ