ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವ ಅಮಾನವೀಯ ಘಟನೆ ಇದು

ಬುಧವಾರ, 26 ಜುಲೈ 2023 (20:45 IST)
ಇದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸೋ ವಿಚಾರವಾಗಿದೆ.ಮಾನವೀಯತೆ ಮರೆತು ಅಸ್ವಸ್ಥನಾಗಿದ್ದ ರೋಗಿಯನ್ನ ಕಸದ ವಾಹನದಲ್ಲಿ ಸಿಬ್ಬಂದಿ ಸಾಗಿಸಿದಾರೆ.ರಸ್ತೆ ಬದಿ ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯನ್ನ  ಸತ್ತ ಪ್ರಾಣಿಯಂತೆ ಕಸದ ಲಾರಿಯಲ್ಲಿ  ಪುರಸಭೆ ಸಿಬ್ಬಂದಿ ತುಂಬಿದ್ದಾರೆ.ಸಿಲಿಕಾನ್ ಸಿಟಿ ಹೊರವಲಯದ ನೆಲಮಂಗಲದಲ್ಲಿ ಈ ಘಟನೆ ನಡೆದಿದೆ.ನಗರಸಭೆ ಸ್ವಚ್ಚಾತ ವಾಹನದಲ್ಲಿ ಅಸ್ವಸ್ಥನಾಗಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸಿಬ್ಬಂದಿ ಸಾಗಿಸಿದ್ದಾರೆ.ಸತ್ತ ಪ್ರಾಣಿಗಳಂತೆ ಕಾರ್ಪೊರೇಷನ್ ಗಾಡಿಗಳಲ್ಲಿ ತುಂಬಿಕೊಂಡು ಸಿಬ್ಬಂದಿ ಹೋದರು.ಜೀವಂತ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿರೋದು ನಿಜಕ್ಕೂ ದುರ್ದೈವ. ಘಟನೆ ಕಾರಣರಾದವರ ಮೇಲೆ ಶೀಘ್ರವಾಗಿ ಕ್ರಮ ಇಲ್ವಾ.? ಅನ್ನುವ ಪ್ರಶ್ನೆ ಸಾರ್ವಜನಿಕರು ಮಾಡ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ