ಎಟಿಎಂಗೆ ತುಂಬಲು ತಂದಿದ್ದ ಹಣದ ಜತೆ ಪರಾರಿಯಾದವರು ಈಗ ಪೊಲೀಸರ ಅತಿಥಿಗಳು!

ಮಂಗಳವಾರ, 6 ಫೆಬ್ರವರಿ 2018 (07:34 IST)
ಬೆಂಗಳೂರು: ಎಟಿಎಂಗೆ ತುಂಬಲು ತಂದಿದ್ದ  90ಲಕ್ಷ ರೂ. ಜತೆ ನಾಲ್ವರು ಪರಾರಿಯಾದ ಪ್ರಕರಣವೊಂದು ನಡೆದಿತ್ತು. ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ನಾಲ್ವರನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳು ನಾರಾಯಣಸ್ವಾಮಿ (45), ನರಸಿಂಹರಾಜು (28), ರಿಯಾಜ್ (30), ಜಗದೀಶ್ (28).


ಜನವರಿ 29ರಂದು ಹಣವಿದ್ದ ಟಾಟಾಸುಮೋ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂಗೆ ಹಣ ತುಂಬುವ ವಾಹನವಾಗಿತ್ತು. ಗನ್ ಮ್ಯಾನ್ ಗೆ ಬಾಳೆಹಣ್ಣು ತರಲು ಹೇಳಿ ಆರೋಪಿಗಳು ಪರಾರಿಯಾಗಿದ್ದರು. ಕಿತ್ತನಹಳ್ಳಿಯ ಬಳಿ ವಾಹನ ಬಿಟ್ಟು ಹಣದೊಂದಿಗೆ ಬಳ್ಳಾರಿಗೆ  ಪರಾರಿಯಾಗಿದ್ದರು. ಬಂಧಿತ ಆರೋಪಿಗಳ ಬಳಿಯಿದ್ದ 80 ಲಕ್ಷ ರೂಪಾಯಿಯನ್ನು  ಜಪ್ತಿ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ