ಮೀನು ಹಿಡಿಯಲು ಹೋದವರು ನೀರುಪಾಲು

ಶುಕ್ರವಾರ, 21 ಅಕ್ಟೋಬರ್ 2022 (18:43 IST)
ಭೋರ್ಗರೆದು ಹರಿಯುತ್ತಿದ್ದ ನೀರಿನಲ್ಲಿ ‌ಮೀನು ಹಿಡಿಯಲು‌ ಹೋಗಿ ಇಬ್ಬರು ಯುವಕರು ‌ನೀರುಪಾಲಾಗಿರುವ ಘಟನೆ ಚಿತ್ರದುರ್ಗ ‌ಜಿಲ್ಲೆಯ ಬೇತೂರುಪಾಳ್ಯ‌ ಗ್ರಾಮದಲ್ಲಿ ನಡೆದಿದೆ. ಲೋಕೇಶ್, ತಿರುಮಲ ಮೃತಪಟ್ಟಿರುವ ಯುವಕರು. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ‌ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇನ್ನೂ ಇಬ್ಬರು ಯುವಕರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಹಳ್ಳದತ್ತ ಜನ ಬಾರದಂತೆ ತಡೆಗೋಡೆ ನಿರ್ಮಿಸಿ ಇಬ್ಬರು ಯುವಕರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಿಗೆ ಪೊಲೀಸರು, ಸ್ಥಳೀಯ ‌ಜನರು ಸಹಕಾರ ನೀಡುತ್ತಿದ್ದಾರೆ. ಸಮೀಪದಲ್ಲಿ ಹರಿಯುವ ವೇದಾವತಿ ನದಿ ನೀರಿನಲ್ಲಿ ಯುವಕರು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ