ಇಂದು ನನ್ನ ಪಾಲಿನ ಸಾರ್ಥಕವಾದ ದಿನ-ಮಾಜಿ ಸಿಎಂ B.S. ಯಡಿಯೂರಪ್ಪ

ಸೋಮವಾರ, 27 ಫೆಬ್ರವರಿ 2023 (16:24 IST)
ಏರ್​ಪೋರ್ಟ್​ ಉದ್ಘಾಟನಾ ಸಮಾವೇಶದಲ್ಲಿ ಮಾಜಿ ಸಿಎಂ B.S. ಯಡಿಯೂರಪ್ಪ ಮಾತನಾಡಿದ್ದು, ಏರ್‌ಪೋರ್ಟ್‌ ಉದ್ಘಾಟಿಸಿರೋದು ಸಂತಸ ತಂದಿದೆ ಎಂದು ಮಾತು ಆರಂಭಿಸಿದ್ರು..ಇಡೀ ವಿಶ್ವವೇ ಮೆಚ್ಚುವಂತ ಆದರ್ಶ ನಾಯಕ ಪ್ರಧಾನಿ ಮೋದಿ. ಅವರು ನನ್ನ ಹುಟ್ಟುಹಬ್ಬದ ದಿನವೇ ಏರ್​​ಪೋರ್ಟ್​​​​ ಉದ್ಘಾಟನೆ ಆಗಬೇಕು ಎಂದಿದ್ರು. ಶಿವಮೊಗ್ಗಕ್ಕೆ ಬಂದೇ ಬರುತ್ತೇನೆ ಎಂದು ಮೋದಿ ಹೇಳಿದ್ರು. ಅದು ಇಂದು ಸಾಕಾರಗೊಂಡಿದೆ ಎಂದು BSY ಸಂತಸ ವ್ಯಕ್ತಪಡಿಸಿದ್ರು.. ಶಿವಮೊಗ್ಗದಲ್ಲಿ ಅಭಿವೃದ್ಧಿ ಮತ್ತಷ್ಟು ಎತ್ತರಕ್ಕೆ ತಲುಪಲಿದೆ. ನನ್ನ ರಾಜಕೀಯ ಜೀವನದಲ್ಲಿ ಈ ದಿನ ವಿಶೇಷ ದಿನವಾಗಿದೆ. ಇಂದು ನನ್ನ ಪಾಲಿನ ಸಾರ್ಥಕವಾದ ದಿನ. ಇದು ಕೇವಲ ಏರ್‌ಪೋರ್ಟ್‌ ಅಲ್ಲ. ಮಲೆನಾಡಿಗರ ಕನಸು ನನಸಾಗುವ ಸಮಯ ಎಂದು ಖುಷಿ ವ್ಯಕ್ತಪಡಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ