ಇವತ್ತೂ ವಿಶ್ವಾಸಮತ ಮುಗಿಯೋದು ಪಕ್ಕಾ ಡೌಟ್

ಸೋಮವಾರ, 22 ಜುಲೈ 2019 (15:55 IST)

ಸೋಮವಾರ ಎಷ್ಟೇ ಆದರೂ ವಿಶ್ವಾಸಮತ ಪೂರ್ಣಗೊಳಿಸೋದಾಗಿ ಸ್ಪೀಕರ್ ಹೇಳಿದ್ರು. ಆದರೆ ಮಂಗಳವಾರವೂ ಚರ್ಚೆ ಮುಂದುವರಿಯೋ ಸಾಧ್ಯತೆ ಹೆಚ್ಚಿದೆ.

ವಿಧಾನಸಭೆ ಕಲಾಪದಲ್ಲಿ ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೈ ಪಡೆ ನಾಯಕರು ಭೇಟಿ ಮಾಡಿದ್ದಾರೆ.

ವಿಶ್ವಾಸಮತವನ್ನು ಬೇಗನೆ ಕೇಳಿ ಅಂತ ಸ್ಪೀಕರ್ ಹೇಳಿದ್ದಾರೆ. ಆದರೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಇರೋದರಿಂದ ನಾಳಿನ ಕೋರ್ಟ್ ತೀರ್ಮಾನ ನೋಡಿ ಮುಂದುವರಿಯುತ್ತೇವೆ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಹೀಗಾಗಿ ವಿಪ್ ಜಾರಿ ಗೊಂದಲ ಬಗೆಹರಿದ ಮೇಲೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ನೋಡಿ ನಾಳೆ ವಿಶ್ವಾಸಮತ ಯಾಚನೆ ಮಾಡೋದಾಗಿ ಕಾಂಗ್ರೆಸ್ ಮುಖಂಡರು ಸ್ಪೀಕರ್ ಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ