ಖರ್ಗೆ ನೀಡಿದ್ರು ಬೈಕ್ ನಿಂದ ಬಿದ್ದವನಿಗೆ ಚಿಕಿತ್ಸೆ

ಭಾನುವಾರ, 30 ಜೂನ್ 2019 (18:13 IST)
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರಿಗೆ ಸಚಿವ ಖರ್ಗೆ ಪ್ರಥಮ ಚಿಕಿತ್ಸೆನೀಡಿದ ಘಟನೆ ನಡೆದಿದೆ.

ಮರಗುತ್ತಿ ಗ್ರಾಮದ ಹುತಾತ್ಮ ಯೋಧ ಮಹಾದೇವ ಅವರಿಗೆ ಶೃದ್ದಾಂಜಲಿ ಸಲ್ಲಿಸಿದ ನಂತರ ಕಲಬುರಗಿ‌ ನಗರಕ್ಕೆ ವಾಪಸಾಗುತ್ತಿದ್ದ  ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ.

ಪ್ರಿಯಾಂಕ್ ಖರ್ಗೆ ವಾಪಸ್ ಆಗುತ್ತಿದ್ದ ಮಾರ್ಗಮಧ್ಯೆದಲ್ಲಿ ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದ ಯುವಕರು. ಆ ಯುವಕರಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು ಸಚಿವ ಖರ್ಗೆ.

ವಾಹನ ಚಾಲನೆ ಮಾಡುತ್ತಿರುವಾಗ ಹೆಚ್ಚಿನ‌ ಎಚ್ಚರಿಕೆ ವಹಿಸುವಂತೆ ಗಾಯಾಳುಗಳಿಗೆ ಸಚಿವ ಪ್ರಿಯಾಂಕ ಖರ್ಗೆ ಕಿವಿಮಾತು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ