ಉಡುಪಿ ಪೊಲೀಸ್ ಪೇದೆ ಅಮಾನತು ವಾಪಸ್

ಶನಿವಾರ, 15 ಏಪ್ರಿಲ್ 2017 (08:41 IST)
ಮಂಗಳೂರು: ಪತ್ನಿಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸಿದ್ದ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆಯ ಪೇದೆ ಪ್ರಕಾಶ್ ಅಮಾನತು ಹಿಂಪಡೆಯಲಾಗಿದೆ.

 

ಪ್ರಕಾಶ್ ವಿಚಾರಣೆಗೊಳಪಡಿಸಿದ ವ್ಯಕ್ತಿ ಶಾಸಕ ಪ್ರಮೋದ್ ಮಧ್ವರಾಜ್ ಒಡೆತನದ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಶಾಸಕರಿಗೆ ಆಪ್ತರಾದವರನ್ನು ವಿಚಾರಣೆಗೊಳಪಡಿಸಿದ ತಪ್ಪಿಗೆ ಪೇದೆಗೆ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.

 
ಇದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ ಶಾಸಕ ಮಧ್ವರಾಜ್ ರನ್ನು ಕರೆಸಿ ವಿವರಣೆ ಪಡೆದಿದ್ದರು. ಇದೀಗ ಅಮಾನತು ಹಿಂಪಡೆದ ಆದೇಶ ಬಂದಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ