‘ಬಂಗಾರ’ ಬಾಯ್ಕಾಟ್​​ಗೆ ಅಸಮಾಧಾನ

ಸೋಮವಾರ, 25 ಏಪ್ರಿಲ್ 2022 (20:55 IST)
ಪ್ರಮೋದ್ ಮುತಾಲಿಕ್ ಕರೆಕೊಟ್ಟಿರುವ​ ‘ಬಂಗಾರ’ ಬಾಯ್ಕಾಟ್​ ಅಭಿಯಾನ ವಿಚಾರ ಕುರಿತು ಗೋಲ್ಡ್ ಅಸೋಸಿಯೇಷನ್ ಕಾರ್ಯದರ್ಶಿ ಸಾದಿಕ್ ಪಾಷಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ..ಚಿನ್ನದ ವ್ಯಾಪಾರದಲ್ಲಿ ಮುಸ್ಲಿಮರು ಕಡಿಮೆ ಇದ್ದು, ಕೇವಲ 10% ಮಾತ್ರ ಮುಸ್ಲಿಂ ಚಿನ್ನದ ವ್ಯಾಪಾರಿಗಳಿದ್ದಾರೆ..ಮುಸ್ಲಿಮರು ಮದುವೆ, ರಂಜಾನ್ ಸಮಯದಲ್ಲಿ ಹೆಚ್ಚು ಚಿನ್ನವನ್ನ ಹಿಂದೂಗಳ ಅಂಗಡಿಯಲ್ಲೇ ಖರೀದಿಸ್ತಾರೆ..ಇದೀಗ ಚಿನ್ನದ ವ್ಯಾಪಾರದಲ್ಲಿ ಧರ್ಮ ತರೋದು ಸರಿಯಲ್ಲ..ಅಕ್ಷಯ ತೃತೀಯ ದಿನದಂದು ನಮಗೇನು ಹೆಚ್ಚು ವ್ಯಾಪಾರ ಆಗಲ್ಲ..ಇದನ್ನ ಮುತಾಲಿಕ್ & ಅವರ ಕಂಪನಿ ಅರ್ಥ ಮಾಡಿಕೊಳ್ಳಬೇಕು ಅಂತ ಗೋಲ್ಡ್ ಅಸೋಸಿಯೇಷನ್ ಕಾರ್ಯದರ್ಶಿ ಸಾದಿಕ್ ಪಾಷಾ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ