ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ; ಧರ್ಮೇಗೌಡರನ್ನು ನೆನೆದು ಕಣ್ಣೀರಿಟ್ಟ ಮಾಜಿ ಪ್ರಧಾನಿ

ಮಂಗಳವಾರ, 29 ಡಿಸೆಂಬರ್ 2020 (11:20 IST)
ಬೆಂಗಳೂರು : ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಅವರನ್ನು ನೆನೆದು  ಮಾಜಿ ಪ್ರಧಾನಿ ದೇವೇಗೌಡ ಕಣ್ಣೀರು ಹಾಕಿದ್ದಾರೆ.

ಧರ್ಮೇಗೌಡರ ತಂದೆ ಕಾಲದಿಂದಲೂ ನಮಗೆ ಪರಿಚಯ. ಇತ್ತೀಚೆಗೆ ವಿಧಾನಪರಿಷತ್ ನಲ್ಲಿ ಗಲಾಟೆಯಾಗಿತ್ತು. ಈ ಘಟನೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅತ್ಯಂತ ಸೂಕ್ಷ್ಮ ವ್ಯಕ್ತಿ. ರಾಜಕೀಯ ಅಂತ್ಯಕಾಲದಲ್ಲಿ ಇದೆಲ್ಲಾ ನೋಡುವಂತಾಗಿದೆ. ಇದು ಮರೆಯಲಾಗದ ನೋವು ಎಂದು ದುಃಖಿಸಿದ್ದಾರೆ.

ಅವರು ತನ್ನ ನೋವನ್ನು ಯಾರಿಗೂ ಹೇಳಿಲ್ಲ. ಪತ್ನಿ, ಮಕ್ಕಳಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಹೆಸರು ಉಳಿಸುವ ಕೆಲಸ ಕುಟುಂಬದವರು ಮಾಡಲಿ. ಈ ಘಟನೆಯ ಬಗ್ಗೆ ಯಾರನ್ನೂ ದೂಷಿಸುವುದಕ್ಕೆ ಹೋಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ