ತಬ್ಲಿಘಿಗಳು ಸ್ವಯಂಪ್ರೇರಿತವಾಗಿ ತಪಾಸಣೆ ಮಾಡಿಸಿಕೊಳ್ಳಿ- ಬಳ್ಳಾರಿ ಎಸ್ ಪಿ ಖಡಕ್ ವಾರ್ನಿಂಗ್

ಮಂಗಳವಾರ, 7 ಏಪ್ರಿಲ್ 2020 (10:00 IST)
ಬಳ್ಳಾರಿ : ದಿಲ್ಲಿ ಜಮಾತ್ ನಲ್ಲಿ ಭಾಗಿಯಾಗಿದವರು ಸ್ವಯಂಪ್ರೇರಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. ಇಲ್ಲ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಬಳ್ಳಾರಿಯಲ್ಲಿ ತಬ್ಲಿಘಿಗಳಿಗೆ ಬಳ್ಳಾರಿ ಎಸ್ ಪಿ ಸಿಕೆ ಬಾಬಾ ಕೊನೆಯ ಎಚ್ಚರಿಕೆ ನೀಡಿದ್ದಾರೆ.

ಎಚ್ಚರಿಕೆ ಜೀವಕ್ಕೆ ಯಾವ ಧರ್ಮದ ಭೇದ ಭಾವವಿಲ್ಲ. ಪ್ರತಿಯೊಬ್ಬರ ಜೀವವೂ ನಮಗೆ ಮಹತ್ವ. ಇದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ. ದಿಲ್ಲಿಗೆ ಹೋಗಿ ಬಂದವರು ಚಿಕಿತ್ಸೆ ಪಡೆಯಿರಿ. ತಾವಾಗಯೇ ಬಂದು ಪರೀಕ್ಷೆ ಮಾಡಿಸಿಕೊಳ್ಳಿ. ಇಲ್ಲ ನಾವೇ ಹುಡುಕಿ ಚಿಕಿತ್ಸೆ ಕೊಡಿಸುತ್ತೇವೆ. ದೇಶದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಇಲ್ಲವಾದ್ರೆ ನಿಮ್ಮ ಪರಿಸ್ಥಿತಿ ನೆಟ್ಟಗಿರೊಲ್ಲ ಎಂದು ಅವರು ಖಡಕ್ ಆಗಿ ವಾರ್ನ್ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ