ಆರ್.ಅಶೋಕ್ ಮತ್ತು ಡಿಸಿಎಂ ಅಶ್ವತ್ಥ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ವಿ.ಸೋಮಣ್ಣ

ಶುಕ್ರವಾರ, 17 ಜುಲೈ 2020 (11:27 IST)
ಬೆಂಗಳೂರು : ಸಿಎಂ ಕೊಟ್ಟ ಸಲಹೆಗಳನ್ನು ಪಾಲಿಸುವೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಸಭೆ ಕರೆದಿದ್ದಾರೆ. ನನ್ನ ಸಲಹೆ ಕೇಳಿದರೆ ಕೊಡುತ್ತೇನೆ. ಇಲ್ಲದಿದ್ರೆ ಸಿಎಂ ಕೊಟ್ಟ ಸಲಹೆ ಪಾಲಿಸುವೆ. ಸಮಸ್ಯೆ ಇಲ್ಲ ಅಂತೇನಲ್ಲ, ಸಮಸ್ಯೆ ಇದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡ್ತಿದ್ದೇನೆ ಎಂದು ಹೇಳಿದ್ದಾರೆ.

ಹಾಗೇ 8 ವಲಯಗಳಿಗೆ ಉಸ್ತುವಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ದಕ್ಷಿಣ ಅಥವಾ ಪಶ್ಚಿಮ ವಲಯ ಸಿಗಬೇಕಿತ್ತು. ಆದ್ರೆ ಆರ್.ಅಶೋಕ್, ಅಶ್ವತ್ಥ್ ಬುದ್ಧಿವಂತರು . ಹಾಗಾಗಿ ನನಗೆ ಬೆಂಗಳೂರು ಪೂರ್ವ ಸಿಕ್ಕಿದೆ. ಇದು ನನ್ನ ಕರ್ತವ್ಯ ಅಂತ ಕೆಲಸ ಮಾಡ್ತಿದ್ದೇನೆ ಎಂದು ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಅಶ್ವತ್ಥ್ ಗೆ ಪರೋಕ್ಷವಾಗಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ