ಸಂವಿಧಾನದಂತೆ ನಾವು ನಡೆಯುತ್ತಿದ್ದೇವೆ-ಬಸವರಾಜ್ ಹೊರಟ್ಟಿ

ಶುಕ್ರವಾರ, 15 ಸೆಪ್ಟಂಬರ್ 2023 (19:00 IST)
ಇಂದು ಪ್ರಜಾಪ್ರಭುತ್ವ ದಿನ ಹಿನ್ನೆಲೆ ವಿಧಾನಸೌಧದ ಬಳಿ ನಡೆದ ಬನ್ನಿ ಸಂವಿಧಾನ ಓದೋಣ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಭಾಷಣ ಮಾಡಿದರು. ಕರ್ನಾಟಕ ಸರ್ಕಾರ ಮಹತ್ವದ ಕಾರ್ಯಕ್ರಮ ಮಾಡಿದೆ. ಸಂವಿಧಾನ ವಿಚಾರದಲ್ಲಿ ಅರ್ಥಪೂರ್ಣ ಕೆಲಸ ಮಾಡಿದೆ. ಪ್ರತೀ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಸಂವಿಧಾನ ಬರೆದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರ ಸಂವಿಧಾನದಂತೆ ನಾವು ನಡೆಯುತ್ತಿದ್ದೇವೆ. ಅಂತ ಮಹನೀಯರು ಮತ್ತೆ ಮತ್ತೆ ಹುಟ್ಟಿಬರಬೇಕು. ನಾನು ಇಂಗ್ಲೆಂಡ್​ಗೆ ಹೋದಾಗ ಭಾರತದ ಸಂವಿಧಾನ ಬಗ್ಗೆ ಬರೆದಿದ್ದಾರೆ. ಅಂತಹವರನ್ನ ನಮ್ಮ ನಾಡಿಗೆ ಕೊಡಿಗೆಯಾಗಿ ಕೊಟ್ಟಿದೆ. ನಾವೆಲ್ಲಾ ಬಹಳ ಪುಣ್ಯ ಮಾಡಿದ್ದೇವೆ ಆದ್ದರಿಂದ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ