ಸೋಮವಾರ ಮತ್ತೊಂದು ಬಾರಿ ಸಭೆ ಕರೆದಿದ್ದೇವೆ-ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಸೋಮವಾರ, 24 ಜುಲೈ 2023 (14:51 IST)
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಶಾಂತಿನಗರದ ಸಾರಿಗೆ ಕಛೇರಿಯಲ್ಲಿ ಸಭೆ ನಡೆಸಿದ್ರು.ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 27 ರಂದು ಖಾಸಗಿ ವಾಹನ ಬಂದ್ ಮಾಡುತ್ತೇವೆ ಅಂತಾ ಎಂದಿದ್ರು.ಶಕ್ತಿ ಯೋಜನೆಯಿಂದಾಗಿ ಅನೇಕ ಸಮಸ್ಯೆ ಯಾಗಿದೆ ಅಂತಾ ಹೇಳಿದ್ರು.ಆದ್ರೆ ಇಂದಿನ ಸಭೆಯಲ್ಲಿ ಎಲ್ಲಾ  ಭಾಗಿಯಾಗಿ ಅವರ ಎಲ್ಲಾ ಸಮಸ್ಯೆ ಗಳನ್ನು ಹೇಳಿದ್ರು.ಹಾಗಾಗೀ ಸೋಮವಾರ ಮತ್ತೊಂದು ಬಾರಿ ಸಭೆ ಕರೆದಿದ್ದೇವೆ.31-7-2023 ಸೋಮವಾರ ರಂದು ಸಭೆ ನಡೆಯಲಿದೆ.ಮಧ್ಯಾಹ್ನ 2ಗಂಟೆಗೆ ಆಟೋ ಸಂಘಟನೆಗಳ ಸಭೆ ನಡೆಸುತ್ತೆವೆ.ಸಂಜೆ 4ಗಂಟೆಗೆ ಬಸ್ ಸಂಘಟನೆಗಳೊಂದಿದೆ ಸಭೆ ನಡೆಸುತ್ತೆವೆ.ಸಂಜೆ 5ಗಂಟೆಗೆ ಒಕ್ಕೂಟ ಸಂಘಟನೆಗಳ ಸಭೆ ಮಾಡುತ್ತಿವೆ.ಇದರಲ್ಲಿ ಎಲ್ಲಾ ಅವರ ಸಮಸ್ಯೆ ಗಳಿಗೆ ಪರಿಹಾರ  ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ