ಎರಡನೇ ಮದುವೆಯಾಗಲು ನಿರಾಕರಿಸಿದ ವಿವಾಹಿತನಿಗೆ ಯುವತಿಯ ಮಾವಂದಿರು ಮಾಡಿದ್ದೇನು

ಮಂಗಳವಾರ, 6 ನವೆಂಬರ್ 2018 (08:46 IST)
ಮೈಸೂರು : ಯುವತಿಯೊಬ್ಬಳ ಜೊತೆ ಎರಡನೇ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿವಾಹಿತನೊಬ್ಬನನ್ನು ಯುವತಿಯ ಸಂಬಂಧಿಕರು  ಅಪಹರಿಸಿ ಹಲ್ಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್ ಮೊಹಲ್ಲಾದ ನಿವಾಸಿ ಗೌಸ್ ಪೀರ್ ಎಂಬ ವಿವಾಹಿತನಿಗೆ ನೆರೆ ಮನೆಯ ನಿವಾಸಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಆಕೆಯ ಮಾವಂದಿರು ಒತ್ತಾಯ ಮಾಡಿದ್ದಾರೆ. ಇದಕ್ಕೆ ಆತ ನಿರಾಕರಿಸಿದಾಗ ಆತನಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಗೌಸ್ ಪೀರ್  ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ಯುವತಿಯ ಮಾವಂದಿರನ್ನು ಕರೆಯಿಸಿ ವಾರ್ನಿಂಗ್ ಮಾಡಿದ್ದರು.

 

ಆದರೆ ಇಷ್ಟಕ್ಕೆ ಸುಮ್ಮನಾಗದ ಯುವತಿಯ ಮಾವಂದಿರು ಗೌಸ್ ಪೀರ್ ನನ್ನು ಅಪಹರಿಸಿ ತೋಟದ ಮನೆಯೊಂದರಲ್ಲಿ ಅರೆ ಬೆತ್ತಲೆಗೊಳಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಕುರಿತು ಆತ ಪೊಲೀಸ್ ಠಾಣೆಯಲ್ಲಿ  ಯುವತಿಯ ಮಾವಂದಿರ ವಿರುದ್ಧ ದೂರು ದಾಖಲಿಸಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ