ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಹುಚ್ಚ ವೆಂಕಟ್ ರವರ ಗುರುತಿನ ಚಿಹ್ನೆ ಯಾವುದು ಗೊತ್ತಾ…?

ಭಾನುವಾರ, 29 ಏಪ್ರಿಲ್ 2018 (06:59 IST)
ಬೆಂಗಳೂರು : ಚುನಾವಣಾ ಅಖಾಡಕ್ಕೆ ಇಳಿದ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ಚುನಾವಣಾ ಆಯೋಗವು ‘ಚಪ್ಪಲಿ’ ಯನ್ನು ಗುರುತಿನ ಚಿಹ್ನೆಯಾಗಿ ನೀಡಿದೆ.


ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಚುನಾವಣೆ ಪ್ರಚಾರವನ್ನು ಕೂಡ ಶುರು ಮಾಡಿದೆ. ಈ ಬೆನ್ನಲೇ  ಚುನಾವಣೆ ಆಯೋಗವು ಕೂಡ ಅಭ್ಯರ್ಥಿಗಳ ಗುರುತಿನ ಚಿಹ್ನೆಯನ್ನು ಘೋಷಣೆ ಮಾಡಿದ್ದು,  ಆರ್ ಆರ್ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹುಚ್ಚ ವೆಂಕಟ್ ಅವರು ಮಾತು ಮಾತಿಗೂ ನನ್ ಎಕ್ಕಡ ಎಂದು ಯಾವಾಗಲೂ ಹೇಳುತ್ತಿದ್ದು, ಇದೀಗ ಚುನಾವಣಾ ಆಯೋಗವು ಕೂಡ ‘ಚಪ್ಪಲಿ’ ಯನ್ನು ಅವರ ಗುರುತಿನ ಚಿಹ್ನೆಯಾಗಿ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ