ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ನಟ ಉಪೇಂದ್ರರವರ ಅಭಿಪ್ರಾಯವೇನು? ಇಲ್ಲಿದೆ ನೋಡಿ ವಿವರ

ಮಂಗಳವಾರ, 22 ಮೇ 2018 (09:02 IST)
ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.


‘ಐ ಲವ್ ಯು’ ಚಿತ್ರದ ಮುಹೂರ್ತ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದ ಅವರು,’ ಇದು ಯಾರದ್ದು ತಪ್ಪಲ್ಲ, ಯಾವುದೇ ಪಕ್ಷ ಮೆಜಾರಿಟಿ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ. ದುಡ್ಡಿನ ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಆದ್ರೆ ಪ್ರಜಾಕೀಯದಿಂದ ಇದೆಲ್ಲವೂ ಬದಲಾಗಲಿದೆ. ಸದ್ಯ ಕುಮಾರಸ್ವಾಮಿ ಆಡಳಿತ ಹೇಗಿರಲಿದೆ ಅನ್ನೋದನ್ನ ನೋಡಬೇಕು. ನಮ್ಮ ಪ್ರಜಾಕೀಯದ ಕೆಲಸಗಳು ನಿರಂತರವಾಗಿ ನಡೆಯಲಿವೆ. ಇನ್ನು, ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧೆ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪ್ರಜಾಕೀಯ ಅಂದ್ರೆ ಪ್ರಜಾ ಕೀಯ ಅಂದ್ರೆ ಪ್ರಜೆಗಳ ಕೈಯಲ್ಲಿ ಕೀ ಇರೋದೇ ಪ್ರಜಾಕೀಯ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ