ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭೋವಿ ಸಮಾಜದ ಜನರು ಪ್ರತಿಭಟನೆ ನಡೆಸಿದ್ದೇಕೆ?

ಭಾನುವಾರ, 22 ಸೆಪ್ಟಂಬರ್ 2019 (14:49 IST)
ಮೈಸೂರು : ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಭೋವಿ ಸಮಾಜದ ಜನರು ಪ್ರತಿಭಟನೆ ನಡೆಸಿದ್ದಾರೆ.




ಸಿದ್ದರಾಮಯ್ಯ ರನ್ನು ವಡ್ಡ ಎಂದು ಈಶ್ವರಪ್ಪ ನಿಂದಿಸಿದ ಹಿನ್ನಲೆ ಸಚಿವ ಈಶ್ವರಪ್ಪಗೆ ಭೋವಿ ಸಮಾಜ ಘೇರಾವ್ ಹಾಕಿದ್ದು, ಮೈಸೂರಿನಲ್ಲಿ ಚಾಮುಂಡಿಬೆಟ್ಟದಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.


ಗೋ ಬ್ಯಾಕ್ ಈಶ್ವರಪ್ಪ ಎಂದು ಘೋಷಣೆ ಕೋಗುತ್ತಾ ಆಕ್ರೋಶ ವ್ಯಕ್ತಪಡಿಸಿದ  ಪ್ರತಿಭಟನಾಕಾರರು ರಾಕ್ಷಸ ರೂಪದ ಈಶ್ವರಪ್ಪ ಎಂದು ಪೋಸ್ಟರ್ ಹಿಡಿದು ಪ್ರತಿಭಟಿಸಿದ್ದಾರೆ. ನಾವು ಕಲ್ಲು ಒಡೆದು ಜೀವನ ಮಾಡುವಂತಹ ಜನರು. ನಮ್ಮ ಜಾತಿ ಬಗ್ಗೆ ನಿಂದಿಸಿದ್ದೇಕೆಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ