ಶಿವಮೊಗ್ಗದಲ್ಲಿ ಪಡಿತರ ಪಡೆಯಲು ಬಂದವರು ನ್ಯಾಯಬೆಲೆ ಅಂಗಡಿ ವಿರುದ್ಧ ಸಿಡಿದ್ದೆದ್ದೇಕೆ?

ಬುಧವಾರ, 8 ಏಪ್ರಿಲ್ 2020 (13:51 IST)

ಶಿವಮೊಗ್ಗ : ಶಿವಮೊಗ್ಗದಲ್ಲಿ ಪಡಿತರ ಪಡೆಯಲು ಬಂದ ಜನರು ನ್ಯಾಯಬೆಲೆ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 


 

ಬೆಳಿಗ್ಗೆ 6ರಿಂದ ಪಡಿತರ ಪಡೆಯಲು ಜನರು ಸಾಲುಗಟ್ಟಿ ಕಾಯುತ್ತಿದ್ದಾರೆ. ಮೊಬೈಲ್ ಗೆ ಒಪಿಟಿ ಬಂದರಷ್ಟೇ ರೇಷನ್ ಪೂರೈಕೆ ಹಿನ್ನಲೆ ಒಪಿಟಿ ತಡವಾಗುತ್ತಿರುವುದರಿಂದ ರೇಷನ್ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ.

 

ಅಷ್ಟೇ ಅಲ್ಲದೇ ನ್ಯಾಯಬೆಲೆ ಅಂಗಡಿಯಲ್ಲಿ ಸಾಬೂನು, ಉಪ್ಪು, ಅಗರಬತ್ತಿ ನೀಡುವುದರ ಮೂಲಕ  ಸಾರ್ವಜನಿಕರಿಂದ  50ರೂ ವಸೂಲಿ ಮಾಡುತ್ತಿದ್ದ ಹಿನ್ನಲೆ ನ್ಯಾಯಬೆಲೆ ಅಂಗಡಿ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ