ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮುಖ ಕುಯ್ದು ಹಲ್ಲೆ

ಶುಕ್ರವಾರ, 11 ಆಗಸ್ಟ್ 2023 (18:00 IST)
ಮನೆ ಬಾಡಿಗೆ ಪಡೆದ್ಮೇಲೆ ಬಾಡಿಗೆ ಕಟ್ಟಲೇಬೇಕು. ಅಕಸ್ಮಾತ್ ಏನೋ ಕಷ್ಟ ಅಂದ್ರೆ ಹೋಗ್ಲಿ ಒಂದು ತಿಂಗಳು ಬಿಟ್ಟು ಕೊಡಿ ಅಂತ ಮಾಲೀಕ ಹೇಳ್ಬೋದು. ಆದ್ರೆ ಇಲ್ಲೊಬ್ಬ ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಅಂತಾನು ನೋಡದೆ ಚಾಕುವಿನಿಂದ ಮುಖವನ್ನೇ ಕೊಯ್ದಿದ್ದಾನೆ. ನ್ಯಾಯ ಕೊಡ್ಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ರಕ್ಷಣೆ ಮಾಡಬೇಕಾದ ಪೊಲೀಸ್ರ ವಸೂಲಿಗಿಳಿದಿದ್ದಾರೆ.ಬೆಂಗಳೂರಿನಲ್ಲಿ ಬಾಡಿಗೆ ಕೇಳೋದೆ ತಪ್ಪಾ ಅನ್ಸತ್ತೆ. ಯಾಕಂದ್ರೆ ಮಹಿಳೆಯೊಬ್ಬರು ಬಾಡಿಗೆ ಕೇಳಿದ್ದಕ್ಕೆ ಆಕೆಯನ್ನ ಮುಖವನ್ನ ಹೇಗೆ ಕುಯ್ದಿದ್ದಾರೆ ನೋಡಿ. ಅಂದಹಾಗೆ ಈಕೆ ಹೆಸರು ಶ್ರೀದೇವಿ. ವಯಸ್ಸು 40 ವರ್ಷ. ಬೆಂಗಳೂರು ಬಂಡೆಪಾಳ್ಯ ಠಾಣಾ ವ್ಯಾಪ್ತಿಯ ನಿವಾಸಿ. ಕಳೆದ ಹಲವು ವರ್ಷಗಳಿಂದ ಈಕೆ ಫಯಾಜ್ ಎಂಬುವ ವ್ಯಕ್ತಿಗೆ ಸೇರಿದ್ದ ಬಿಲ್ಡಿಂಗ್ ವಾಸವಾಗಿರ್ತಾರೆ. ಫಯಾಜ್ ವಿದೇಶದಲ್ಲಿದ್ದ ಕಾರಣ ಹಲವು ವರ್ಷಗಳಿಂದ ಶ್ರೀದೇವಿಯೆ ಬಿಲ್ಡಿಂಗ್ ನ 18 ಮನೆ ಬಾಡಿಗೆ ಪಡೆದು ಫಯಾಜ್ ಗೆ ನೀಡುತ್ತಿರುತ್ತಾರೆ.

ಇನ್ನೂ ಇದೇ ಬಿಲ್ಡಿಂಗ್ ನಲ್ಲಿ ನಜೀರ್ ಎಂಬಾತ ಸಹ ಬಾಡಿಗೆಗೆ ಇದ್ದು ಮೂರು ತಿಂಗಳಿಂದ ಬಾಡಿಗೆ ಕೊಟ್ಟಿರೋದಿಲ್ಲ. ಹೀಗಾಗಿ ಶ್ರೀದೇವಿ ಸ್ವಲ್ಪ ಗಟ್ಟಿಯಾಗೇ ಬಾಡಿಗೆ ಕೊಡುವಂತೆ ಕೇಳಿದ್ದಾರೆನ್ಯಾಯ್ಕೆ ರೊಚ್ಚಿಗೆದ್ದ ನಜೀರ್ ತನ್ನ ಮಗನಾದ ಸದ್ದಾಂ ಗೆ ವಿಚಾರ ತಿಳಿಸಿದ್ದಾನೆ. ಸ್ಥಳಕ್ಕೆ ಬಂದಿರುವ ಸದ್ದಾಂ ಶ್ರೀದೇವಿ ಮೇಲೆ ಜಗಳ ಮಾಡಿ ನಂತರ ಚಾಕುವಿನಿಂದ ಆಕೆಯ ಮುಖವನ್ನೇ ಕುಯ್ದಿದ್ದಾನೆಇನ್ನೂ ಹಲ್ಲೆಗೊಳಗಾದ ಮಹಿಳೆ ಕುಟುಂಬಸ್ಥರು ಬಂಡೆಪಾಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ಅವರು ಮಾಡಿದ್ದು ವಸೂಲಿ ಕೆಲಸ. ದೂರು ಕೊಟ್ಥರೆ , ಕೋರ್ಟ್ ಗೆ ನಿಮ್ಮ ದೂರನ್ನ ಕಳುಹಿಸೋಕೆ ಹಾಗೂ ಜೆರಾಕ್ಸ್ ಪ್ರತಿಗಳಿಗೆ 6 ಸಾವಿರ ದುಡ್ಡು ಬೇಕು ಅಂತ ವಸೂಲಿ ಮಾಡೋಕೆ ಇಳಿದಿದ್ದಾರೆ. ಹೋಗ್ಲಿ ದೂರಾದ್ರು ಸರಿಯಾಗಿ ತಗೊಂಡ್ರಾ ಅಂದ್ರೆ ಅದು ಇಲ್ಲ. 307 ದಾಖಲಿಸಬೇಕಾದ ಪ್ರಕರಣದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಬೇಕಾದ ರೀತಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಸಹಕರಿಸಿದ್ದಾರೆ ಅಂತ ಶ್ರೀದೇವಿ ಕುಟುಂಬಸ್ಥರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ