ಪ್ರೀತಿಸಿದ ಮದುವೆಯಾದ ಮಹಿಳೆಗೆ ವರದಕ್ಷಿಣೆ ಕಾಟ: ಮಗನೊಂದಿಗೆ ಆತ್ಮಹತ್ಯೆ

ಸೋಮವಾರ, 18 ಜುಲೈ 2022 (10:30 IST)
ಶಿವಮೊಗ್ಗ: ಪ್ರೀತಿಸುವಾಗ ನೀನೇ ನನಗೆ ಇಂದ್ರ ಚಂದ್ರ ಎಂದೆಲ್ಲಾ ಹೇಳಿ ಮದುವೆಯಾದ ಮೇಲೆ ಗಂಡನಿಗೆ ಆಕೆಯ ತವರಿನ ಹಣವೇ ಮುಖ್ಯವಾಯ್ತು. ಗಂಡನ ವರದಕ್ಷಿಣೆ ಕಾಟ ತಡೆಯಲಾಗದೇ ಮಹಿಳೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಐದು ವರ್ಷಗಳ ಹಿಂದೆ ಆರೋಪಿ ಶರತ್ ನನ್ನು ಮಹಿಳೆ ಪ್ರೀತಿಸಿ ಮದುವೆಯಾಗಿದ್ದಳು. ಮದುವೆ ಬಳಿಕ ಶರತ್ ವರದಕ್ಷಿಣೆಗಾಗಿ ಕಾಟ ಕೊಡಲಾರಂಭಿಸಿದ್ದ. ಇದರಿಂದ ಬೇಸತ್ತ ಮಹಿಳೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ಇದೀಗ ಪೊಲೀಸರು ಗಂಡ, ಆತನ ಪೋಷಕರನ್ನು ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ