ನಡುಬೀದಿಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಿ ಥಳಿಸಿದರು..!

ಭಾನುವಾರ, 12 ಫೆಬ್ರವರಿ 2017 (19:39 IST)
ಇದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥಾ ಘಟನೆ. ಮಹಿಳೆಇಯೊಬ್ಬರ ನೆರವಿಗೆ ಬಂದ ಮಹಿಳಾ ಸಂಘಟನೆ ಕಾರ್ಯಕರ್ತೆಯ ಬಟ್ಟೆ ಬಿಚ್ಚಿ ನಡುಬೀದಿಯಲ್ಲಿ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.


ಕಳೆದ ಕೆಲ ದಿನಗಳ ಹಿಂದೆ ಶ್ರೀಕಾಂತ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದ. ದರೆ, ಮತ್ತೆ ಸಿಕ್ಕಿದ್ದು ಆತನ ಶವ ಮಾತ್ರ. ಹೆಂಡತಿಯೇ ಆತನನ್ನ ಕೊಂದಿದ್ದಾಳೆಂದು ಗ್ರಾಮಸ್ಥರು ಸಿಡಿಮಿಡಿಯಾಗಿದ್ದರು. ಈ ಸಂದರ್ಭ ಮಹಿಳೆಯ ಬೆಂಬಲಕ್ಕೆ ನಿಂತ ಮಹಿಳಾ ಸಂಘಟನೆ ಕಾರ್ಯಕರ್ತೆಯ ಬಟ್ಟೆ, ಕೊಲೆ ಆರೋಪಿಗೆ ಸಪೋರ್ಟ್ ಮಾಡ್ತೀಯಾ..? ಎಂದು ಮನಬಂದಂತೆ ಥಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ