ಯಡಿಯೂರಪ್ಪ ಏನ್ ಮಹಾನ್ ಮೇಧಾವಿಯಾ?: ಸಚಿವ ಪಾಟೀಲ್

ಶುಕ್ರವಾರ, 1 ಡಿಸೆಂಬರ್ 2017 (20:07 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಏನ್ ಮಹಾನ್ ಮೇಧಾವಿಯಾ? ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾದಂತಹ ಸಿದ್ದರಾಮಯ್ಯನವರಿಗೆ ಬಚ್ಚಾ ಎಂದು ಕರೆಯುವುದು ಏಕವಚನದಲ್ಲಿ ಟೀಕಿಸುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದು ಗುಡುಗಿದ್ದಾರೆ.
 
ಯಡಿಯೂರಪ್ಪ ನನ್ನ ವಿರುದ್ಧವೂ ಏಕವಚನ ಬಳಸಿ ಟೀಕಿಸಿದ್ದರು. ಆದರೆ, ನಾನು ಅವರ ವಯಸ್ಸಿಗೆ ಗೌರವ ಕೊಟ್ಟು ಸುಮ್ಮನಾಗಿದ್ದೇನೆ. ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ ಎಂದು ಎಚ್ಚರಿಸಿದ್ದಾರೆ.
 
ಪ್ರಧಾನಿ ಮೋದಿಯಾಗಲಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಲಿ ಅವರ ಅವರಿಗೆ ಘನತೆ ಗೌರವವಿದೆ. ಇನ್ನೊಬ್ಬರನ್ನು ಟೀಕಿಸುವ ಬದಲು, ಬೇರೆಯವರನ್ನು ಗೌರವಿಸುವುದು ಬಿಜೆಪಿ ನಾಯಕರು ಕಲಿಯಲಿ ಎಂದು ಸಚಿವ ಎಂ.ಬಿ.ಪಾಟೀಲ್ ಟಾಂಗ್ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ