ಯಡಿಯೂರಪ್ಪರ ಭಾಷಣ ಮುಂದಿನ ಪೀಳಿಗೆಗೆ ಪ್ರೇರಣೆ : ನರೇಂದ್ರ ಮೋದಿ

ಮಂಗಳವಾರ, 28 ಫೆಬ್ರವರಿ 2023 (11:24 IST)
ಶಿವಮೊಗ್ಗ : ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕೆಂಬುದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಭಾಷಣ ಹಾಗೂ ಜೀವನ ಆದರ್ಶವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
 
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಅವರು, ಇಂದು ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನವಾಗಿದೆ. ಅವರು ತಮ್ಮ ಜೀವನವನ್ನು ಬಡವರಿಗೆ, ರೈತರಿಗಾಗಿ ಸಮರ್ಪಿಸಿದ್ದಾರೆ. ಬಿಎಸ್ವೈ ಹಿಂದಿನ ವಾರ ವಿಧಾನಸಭೆಯಲ್ಲಿ ನೀಡಿದ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಶಿವಮೊಗ್ಗದ ಜನರ ಬಹುಕಾಲದ ಕನಸು ನನಸಾಗಿದೆ. ಸಂಪ್ರದಾಯ ಮತ್ತು ಪರಂಪರೆಯ ಅದ್ಭುತ ಸಂಗಮ ಕರ್ನಾಟಕವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ. ಶಿವಮೊಗ್ಗ ಜನರ ಹೊಸ ಕನಸಿನ ಆರಂಭವಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣವು ಉತ್ಕೃಷ್ಟ ಕಾಲದಲ್ಲಿ ಆಗುತ್ತಿದೆ. 2014ಕ್ಕೆ ಮೊದಲು ಏರ್ ಇಂಡಿಯಾ ಸುದ್ದಿಯು ನಕಾರಾತ್ಮಕ ಸುದ್ದಿಗೆ ಸೀಮಿತವಾಗಿತ್ತು. ಇಂದು ಏರ್ ಇಂಡಿಯಾವು ವಿಶ್ವದ ದುಬಾರಿ ವಿಮಾನವನ್ನು ಖರೀದಿಸುವಷ್ಟು ಶಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ