ದೇವರ ದರ್ಶನಕ್ಕೆ ಬಂದ ಯಮಲೋಕ ಸೇರಿದ ಬಾಲಕ!

ಬುಧವಾರ, 28 ನವೆಂಬರ್ 2018 (17:01 IST)
ಆತ ತನ್ನ ಕುಟುಂಬದವರೊಂದಿಗೆ ದೇವರ ದರ್ಶನಕ್ಕೆ ಬಂದಿದ್ದನು. ಆದರೆ ದೇವರ ದರ್ಶನಕ್ಕೂ ಮೊದಲೇ ಆತ ಸಾವನ್ನಪ್ಪಿದ್ದಾನೆ. ಇನ್ನೂ ಬಾಳಿ ಬದುಕಬೇಕಾದ ಬಾಲಕ ಇಹಲೋಕ ತ್ಯಜಿಸಿದ್ದಾನೆ.

ಆಟೋ ಪಲ್ಟಿ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರಿನ ದೇವರಾಯನ ದುರ್ಗ ದಲ್ಲಿ ಘಟನೆ‌ ನಡೆದಿದ್ದು,
ದೇವರ ದರ್ಶನಕ್ಕೆ ಬಂದಿದ್ದ 10 ಮಂದಿಗೆ ಗಾಯಗಳಾಗಿವೆ.

ತುಮಕೂರಿನ ಹಲಸಿನಕೆರೆ ತಿರುವಿನಲ್ಲಿ ದುರಂತ ಸಂಭವಿಸಿದೆ. ಮಡಕಶಿರಾದಿಂದ  ದೇವರಾಯನ ದುರ್ಗಕ್ಕೆ ಬಂದಿದ್ದ ಕುಟುಂಬದವರು. ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ಆಗಮಿಸಿ ಬೆಳಿಗ್ಗೆ ಪೊಜೆ ಮುಗಿಸಿ ತೆರಳುವಾಗ ಅವಘಡ ಸಂಭವಿಸಿದೆ. ಗಾಯಗೊಂಡ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ