ಮದುವೆಯಾಗಿದ್ದವನ ತೆಕ್ಕೆಯಲ್ಲಿದ್ದ ಯುವತಿ ಪ್ರಾಣ ಬಿಟ್ಟಿದ್ಯಾಕೆ?

ಶನಿವಾರ, 12 ಡಿಸೆಂಬರ್ 2020 (13:05 IST)
ಮದುವೆಯಾಗಿದ್ದವನ ತೆಕ್ಕೆಗೆ ಬಿದ್ದಿದ್ದ ಯುವತಿಗೆ ಆಗಬಾರದ್ದು ಆಗಿದೆ.

ಇಬ್ಬರು ಮಕ್ಕಳಿರುವ ನರಸಪ್ಪನ ಪ್ರೀತಿಯಲ್ಲಿ 17 ವರ್ಷದ ಯುವತಿ ಬಿದ್ದಿದ್ದಳು.

ಇವರಿಬ್ಬರ ಪ್ರೀತಿಗೆ ಹುಡುಗಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಇಬ್ಬರೂ ಪ್ರೀತಿಯನ್ನು ಮುಂದುವರಿಸಿದ್ದರು.

ಕೊನೆಗೆ ವಿರೋಧ ಹೆಚ್ಚಾಗುತ್ತಿದ್ದಂತೆ ಅಪ್ರಾಪ್ತೆ ಹಾಗೂ ನರಸಪ್ಪ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಪ್ರಾಪ್ತೆ ಸಾವನ್ನಪ್ಪಿದ್ದರೆ, ನರಸಪ್ಪನ ಸ್ಥಿತಿ ಗಂಭೀರವಾಗಿದೆ.

ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ