ರುದ್ರಯ್ಯ ರೀಚಾರ್ಜ್ ನೆಪದಲ್ಲಿ ಮಹಿಳೆಯರಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಮುಂದಿಟ್ಟುಕೊಂಡು ತಂಬ್ರಳ್ಳಿ ಠಾಣೆ ಪೊಲೀಸ್ ಪೇದೆ ಬಸವರಾಜ್, ನನಗೆ 1 ಲಕ್ಷ ರೂ ಕೊಡಬೇಕು. ಇಲ್ಲವಾದರೆ ನಿನ್ನ ಮೇಲೆ ಪೊಲೀಸ್ ಪ್ರಕರಣ ದಾಖಲಿಸುವುದಾಗಿ ರುದ್ರಯ್ಯನಿಗೆ ಬೆದರಿಕೆ ಒಡ್ಡುತ್ತಿದ್ದನಂತೆ.
ಆತನ ಮನೆಯಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, "ನನಗಾದ ನ್ಯಾಯ ಬೇರೆ ಯಾರಿಗೂ ಆಗಬಾರದು. ನನ್ನ ಅವರ ಕಾಲ್ ಡಿಟೆಲ್ಸ್ ತೆಗೆದು ನೋಡಿ, ಆತ ನನಗೆ ಯಾವ ರೀತಿಯಲ್ಲಿ ಬೆದರಿಕೆ ಹಾಕಿದ್ದಾನೆಂದು ಗೊತ್ತಾಗುತ್ತದೆ", ಎಂದಾತ ಬರೆದಿದ್ದಾನೆ.