ಸೋಮಶೇಖರ್ ರೆಡ್ಡಿಯ ತಾಕತ್ ಗೆ ಸವಾಲ್ ಹಾಕಿದ ಜಮೀರ್ ಅಹ್ಮದ್

ಸೋಮವಾರ, 6 ಜನವರಿ 2020 (19:31 IST)
ಮಾಜಿ ಸಚಿವ ಜಮೀರ್ ಅಹಮದ್ ಅವರು ಶಾಸಕ ಸೋಮಶೇಖರ್ ರೆಡ್ಡಿಯವರಿಗೆ ಏಕವಚನದಲ್ಲಿ ಹರಿಹಾಯ್ದು ಎಚ್ಚರಿಕೆ ನೀಡಿದ್ದಾರೆ.
 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಜಮೀರ್ ಅಹಮದ್, ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇದೆಯಾ? ಎಂದು ಕೇಳಿದ್ರು.
 

ಸೋಮಶೇಖರ್ ರೆಡ್ಡಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದಿನ ಸೋಮವಾರದವರೆಗೆ ಕಾಯ್ತೇನೆ. ಕ್ರಮ ಇಲ್ಲದೇ ಹೋದರೆ ಸೋಮಶೇಖರ್ ರೆಡ್ಡಿ ಮನೆ ಮುಂದೆ ನಾನೇ ಧರಣಿ ಕೂರುತ್ತೇನೆ. ಏನು ಮಾಡುತ್ತಾನೋ ಮೊದಲು ನನಗೇ ಮಾಡಲಿ ನೋಡೋಣ ಎಂದು ಸವಾಲೆಸೆದರು.

ಏಕವಚನದಲ್ಲಿ ಮಾತನಾಡಿದ ಜಮೀರ್ ಅಹಮದ್, 'ಸೋಮಶೇಖರ್ ರೆಡ್ಡಿ ಖಡ್ಗ ತರ್ತಾನೋ ಏನು ತರ್ತಾನೋ ನೋಡ್ತೀನಿ. ಮೊದಲು ನನ್ನನ್ನು ಉಫ್ ಅಂತ ಹಾರಿಸಲಿ ನೋಡೋಣ. ಸೋಮಶೇಖರ್ ರೆಡ್ಡಿಗೆ ತಾಕತ್ತಿದ್ರೆ  ಏನು ಮಾಡ್ತೀಯೋ ಮಾಡ್ಕೊ!

ಅವನು ಖಡ್ಗ ತಂದರೆ ನಾವು ಬಳೆ ಹಾಕ್ಕೊಂಡು ಕೂತಿಲ್ಲ ಎಂದು ಎದೆ ತಟ್ಟಿ ಸೋಮಶೇಖರ್ ರೆಡ್ಡಿಗೆ ವಾರ್ನಿಂಗ್ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ