ಆಡಿಯೋ ತಿರುಚಿ ಶೇರ್​ ಮಾಡಲಾಗಿದೆ- H.D.ರೇವಣ್ಣ

ಶುಕ್ರವಾರ, 17 ಮಾರ್ಚ್ 2023 (21:04 IST)
ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಂತಿಮವಾದ ತೀರ್ಮಾನವನ್ನು ಜನತೆ ಕೊಡ್ತಾರೆ ಎಂದು ಅರಸೀಕೆರೆ ಶಾಸಕ K.M. ಶಿವಲಿಂಗೇಗೌಡ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, H.D.ರೇವಣ್ಣ ಹಾಗೂ ತಮ್ಮ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ವಿಚಾರ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮತ್ತು ರೇವಣ್ಣ ಅವರ ನಡುವಿನ ಸಂಭಾಷಣೆ ವೈರಲ್ ಆಗಿದೆ. ನಾನು ರೇವಣ್ಣ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇವೆ. ಆದರೆ ಅದನ್ನು ಎಡಿಟಿಂಗ್ ಮಾಡಿ ತಮಗೆ ಉಪಯುಕ್ತವಾಗುವ ರೀತಿಯಲ್ಲಿ ತುಂಡು ತುಂಡು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ನನ್ನ ಕ್ಷೇತ್ರದ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನು ತಾವು ಮಾಡ್ತಾ ಇದ್ದೀರಿ. ಇದರಿಂದ ನೀವು ಯಶಸ್ಸು ಕಾಣುವುದಿಲ್ಲ. ಕ್ಷೇತ್ರದ ಜನತೆಗೆ ನಾನು ಯಾರು ಏನು ಅಂತಾ ಗೊತ್ತಿದೆ ಎಂದರು. ಮಾಜಿ ಸಚಿವರಾಗಿ, ಜಿಲ್ಲೆಯ ನಾಯಕರಾಗಿ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಡುವಂತಹ ಕೆಲಸವನ್ನು ನೀವು ಏನ್ ಮಾಡ್ತಿದ್ದೀರಿ ನಿಮಗೆ ಶೋಭೆ ತರುವಂತಹದ್ದಲ್ಲ. ನಾನು ಕೀ ಪ್ಯಾಡ್ ಫೋನ್ ಇಟ್ಟುಕೊಂಡಿದ್ದೀನಿ. ನನಗೆ ಸಾಮಾಜಿಕ ಜಾಲತಾಣದ ಬಗ್ಗೆ ಅಷ್ಟು ಅರಿವಿಲ್ಲ.. ಆದರೆ ಯಾರೋ ಮಧ್ಯದಲ್ಲಿ ರಾಜಕೀಯ ಕುತಂತ್ರವನ್ನು ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ