ಮತದಾರರ ಪ್ರಶ್ನೆಗೆ ಫುಲ್ ಗರಂ ಆದ ಸಚಿವ?

ಶನಿವಾರ, 13 ಏಪ್ರಿಲ್ 2019 (17:58 IST)
ನೀನು ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು ಎಂದು ಮತದಾರನೊಬ್ಬನಿಗೆ ಸಚಿವರೊಬ್ಬರು ಕೈ ಮುಗಿದ ಘಟನೆ ನಡೆದಿದೆ.

ನನ್ನ ಕೈಯಲ್ಲಿ ಆದ ಕೆಲಸ ನಾನ ಮಾಡಿದ್ದೇನಿ.  ನನ್ನಿಂದ ಎಲ್ಲರಿಗೂ ಉದ್ಯೋಗ ಕೊಡಿಸಲು ಆಗಲ್ಲ. ನೀನೂ ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು. ನನಗೆ ಎನೂ ತೊಂದರೆಯಿಲ್ಲ ಅಂತಾ ಮತದಾರರ ಪ್ರಶ್ನೆಗೆ ಕೆಂಡಾ ಮಂಡಲರಾಗಿ ಸಚಿವ ನಡೆದುಕೊಂಡಿದ್ದಾರೆ.

ಸಚಿವ ತುಕಾರಾಂ  ಈ ರೀತಿ ಉತ್ತರಿಸೋ ಮೂಲಕ ಗರಂ ಆದ ಘಟನೆ ನಡೆದಿದೆ. ಬಳ್ಳಾರಿಯ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಉಗ್ರಪ್ಪ ಪರ ಪ್ರಚಾರ ನಡೆಸೋ ವೇಳೆ ಸಚಿವ ಈ. ತುಕಾರಾಂ ಗೆ ನೀವೂ ಜಿಂದಾಲನಲ್ಲಿ ಯುವಕರಿಗೆ ಉದ್ಯೋಗ ಕೊಡಿಸಲು ಲೇಟರ್ ಕೊಡತ್ತಿಲ್ಲವೆಂದು ಮತದಾರರು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ರು. ಈ ವೇಳೆ ತಾಳ್ಮೆ ಕಳೆದುಕೊಂಡ ಸಚಿವ ತುಕಾರಾಂ, ನೀನೂ ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು ನನಗೇನೂ ತೊಂದರೆ ಇಲ್ಲ ಅನ್ನೋ ಮೂಲಕ ಮತದಾರರ ವಿರುದ್ಧ ಗರಂ ಆಗಿ ಭಾಷಣ ಮೊಟಕುಗೊಳಿಸಿ ಪ್ರಚಾರವನ್ನ ಅರ್ಧಕ್ಕೆ ಸ್ಥಗಿತಗೊಳಿಸಿ ಗ್ರಾಮದಿಂದ ಹೊರನಡೆದರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ