‘ದೇಶ ಸೇವೆ ಮಾಡಲು ಶಿವ ನನಗೆ ಆದೇಶಿಸಿದ್ದಾನೆ’

ಶುಕ್ರವಾರ, 20 ಅಕ್ಟೋಬರ್ 2017 (11:35 IST)
ನವದೆಹಲಿ: ಕೇದಾರನಾಥ ದೇವರ ದರ್ಶನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕೇದಾರ್ ಪುರಿಯಲ್ಲಿ ಬೃಹತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ.

 
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ದೇಶದ 125 ಕೋಟಿ ಜನರ ಸೇವೆ ಮಾಡುವಂತೆ ನನಗೆ ಭಗವಾನ್ ಶಿವ ಆದೇಶಿಸಿದ್ದಾನೆ. ಅದರಂತೆ ನಾನು ದೇಶ ಸೇವೆ ಮಾಡುತ್ತಿದ್ದೇನೆ. ಸದ್ಯದಲ್ಲಿಯೇ ಕೇದಾರ್ ಪುರಿಯನ್ನು ಆಧುನಿಕ, ಭವ್ಯ ನಗರವಾಗಿ ಬದಲಾಯಿಸುತ್ತೇನೆ’ ಎಂದು ಪ್ರಧಾನಿ ಮೋದಿ ಭರರವಸೆ ನೀಡಿದ್ದಾರೆ.

ಹಲವಾರು ಕೋಟಿ ರೂ ಯೋಜನೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಜತೆಗೆ ರಾಜ್ಯಪಾಲ ಮತ್ತು ಉತ್ತರಾಖಂಡ ಸಿಎಂ ಕೂಡಾ ಜತೆಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ