ತಿರುಪತಿಯಲ್ಲಿ ದರ್ಶನಕ್ಕೆ ನೂಕುನುಗ್ಗಲು; ಮೂವರಿಗೆ ಗಾಯ

ಮಂಗಳವಾರ, 12 ಏಪ್ರಿಲ್ 2022 (18:36 IST)
ಜಗದ್ವಿಖ್ಯಾತ ತಿರುಮತಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿದೆ ಈ ಘಟನೆ ಆಂಧ್ರಪ್ರದೇಶದ ತಿರುಮಲದಲ್ಲಿ ನಡೆದಿದೆ.
ಸರ್ವದರ್ಶನ ಟಿಕೆಟ್‌ ಕೌಂಟರ್‌ ಬಳಿ ಜಮಾಯಿಸಿರುವ ಭಕ್ತರ ನಡುವೆ ಟಿಕೆಟ್‌ಗಾಗಿ ನೂಕುನುಗ್ಗಲು ಉಂಟಾಗಿದ್ದು, ಒಂದು ಹಂತದಲ್ಲಿ ಕಾಲ್ತುಳಿತಕ್ಕೆ ಒಳಗಾಗುವ ಆತಂಕ ಎದುರಾಗಿದೆ.
ಭಕ್ತರು ಒಬ್ಬರಿಗೊಬ್ಬರು ತಳ್ಳಾಟ ನಡೆಸುತ್ತಿರುವ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಪರದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದೇವರ ದರ್ಶನಕ್ಕೆ ಬಂದಿದ್ದ ಮಕ್ಕಳು ಹಾಗೂ ಮಹಿಳೆಯರು ಕಣ್ಣೀರು ಹಾಕುತ್ತಿರುವುದು ಕಂಡು ಬಂದಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ