ಬಂಡಿಪೋರಾದಲ್ಲಿ ಉಗ್ರರ ಒಳನುಸುಳುವಿಕೆ ವಿಫಲ: ಮೂವರು ಭಯೋತ್ಪಾದಕರ ಹತ್ಯೆ

ಗುರುವಾರ, 27 ಜುಲೈ 2017 (14:18 IST)
ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಗುರೆಜ್ ಸೆಕ್ಟರ್ ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ 3 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. 
 
ಗಡಿ ರೇಖೆಯ ಪ್ರದೇಶದಲ್ಲಿ ಶಂಕಾಸ್ಪದ ಚಲನ ವಲನಗಳು ಕಂಡು ಬಂದ ಹಿನ್ನಲೆಯಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದು, ತಕ್ಷಣವೇ ಗುಂಡಿನ ಕಾಳಗ ಪ್ರಾರಂಭವಾಗಿದೆ. ಈ ವೇಳೆ ಮೂವರು ಉಗ್ರರನ್ನು ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 
 
ಇನ್ನಷ್ಟು ನುಸುಳುಕೋರರು ಹೊಂಚುಹಾಕುತ್ತಿರುವ ಕುರಿತು ಶಂಕೆ ಇದ್ದು, ಯೋಧರು ಶೋಧ ಕಾರ್ಯ ಮುಂದುವರೆಸಿದ್ದಾರೆ.   
 

ವೆಬ್ದುನಿಯಾವನ್ನು ಓದಿ