ಕ್ಷೌರ ಮಾಡುವಂತೆ ತಂದೆ ಗದರಿಸಿದಕ್ಕೆ ಇಂತಹ ಕೆಲಸ ಮಾಡಿದ ಯುವಕ

ಶುಕ್ರವಾರ, 19 ಮಾರ್ಚ್ 2021 (07:59 IST)
ಚೆನ್ನೈ : ತಂದೆ ಗದರಿಸಿದ್ದಕ್ಕೆ 20 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.

ಯುವಕ ಕಳೆದ 1 ವರ್ಷದಿಂದ ತನ್ನ ಕೂದಲನ್ನು ಬೆಳೆಸುತ್ತಿದ್ದನು. ಆದರೆ ಅದನ್ನು ನೋಡಿದ ತಂದೆ ಕ್ಷೌರ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಯುವಕ ಅದನ್ನು ನಿರಾಕರಿಸಿದಾಗ ತಂದೆ ಗದರಿಸಿದ್ದಾರೆ. ಇದರಿಂದ ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ಊಟಕ್ಕೆ ಬಾರದ ಹಿನ್ನಲೆಯಲ್ಲಿ ಮನೆಯವರು ಹೋಗಿ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ