ವಾಮಾಚಾರಕ್ಕೆ ಒಳಗಾಗಿ ಮಕ್ಕಳನ್ನೇ ಕೊಂದ ತಾಯಿ!

ಶನಿವಾರ, 24 ಫೆಬ್ರವರಿ 2018 (12:19 IST)
ನವದೆಹಲಿ: ವಾಮಾಚಾರದಿಂದ ಪ್ರಭಾವಿತಗೊಂಡ ಮಹಿಳೆಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ
 
ಸಾಯಿಸಿರುವ ಘಟನೆಯೊಂದು  ಮೋತಿ ನಗರದಲ್ಲಿ ನಡೆದಿದೆ. ಆರುವರ್ಷದ ನಂದಿನಿ ಹಾಗೂ ಆರು ತಿಂಗಳ ಆಕಾಂಕ್ಷ ಕೊಲೆಯಾದ ಮಕ್ಕಳು.


ಪೊಲೀಸರು ಆರೋಪಿ ಸುಮನಾ ಅವರನ್ನು ಶಹದಾರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


ಸುಮನಾ ಅವರು ಇತ್ತೀಚೆಗೆ ತಾಂತ್ರಿಕರೊಬ್ಬರ ಬಳಿ ಹೋಗಿ ಬಂದ ನಂತರ ಆಕೆಯ ವರ್ತನೆ ತುಂಬ ವಿಚಿತ್ರವಾಗಿದೆ. ಆಕೆ ವಾಮಾಚಾರದ ಪ್ರಭಾವಕ್ಕೆ ಒಳಗಾಗಿ ಮಕ್ಕಳನ್ನು ಸಾಯಿಸಿರಬೇಕು. ಆಕೆಯ ವರ್ತನೆ ಭೀತಿ ಹುಟ್ಟಿಸುತ್ತಿದೆ. ಅನೇಕ ಸಾರಿ ನನಗೆ ಹೊಡೆದಿದ್ದಾಳೆ ಎಂದು ಪತಿ ಹೇಳಿದ್ದಾರೆ.


ತನಿಖೆ ಸಮಯದಲ್ಲಿ ಆರೋಪಿ ಒಂದು ಕ್ಷಣ ಆಘಾತಗೊಂಡಂತೆ ವರ್ತಿಸಿದರೆ, ಮತ್ತೊಮ್ಮೆ ಬೇರೆಯೇ ವರ್ತನೆಯನ್ನು ತೋರಿಸುತ್ತಿದ್ದಾರೆ. ಮಕ್ಕಳನ್ನು ಸಾಯಿಸಿದ ತಪ್ಪಿತಸ್ಥ ಭಾವನೆಯೂ  ಆಕೆಯಲ್ಲಿ ಕಾಣಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ