ವಂದೇ ಭಾರತ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದ ಗೃಹಸಚಿವ ಅಮಿತ್ ಶಾ

ಗುರುವಾರ, 3 ಅಕ್ಟೋಬರ್ 2019 (10:34 IST)
ನವದೆಹಲಿ: ದೆಹಲಿ-ಕತ್ರಾ ನಡುವೆ ಓಡಾಡಲಿರುವ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಿಗ್ಗೆ ಚಾಲನೆ ನೀಡಿದ್ದಾರೆ.


ಈ ರೈಲು ದೆಹಲಿ-ಕತ್ರಾ ನಡುವಿನ ಸಂಚಾರವನ್ನು ನಾಲ್ಕು ಗಂಟೆಗಳಷ್ಟು ಕಡಿತಮಾಡಲಿದೆ. ಅಂದರೆ ಈ ಮೊದಲು ಈ ಯಾತ್ರೆಗೆ 12 ಗಂಟೆ ಬೇಕಾಗಿತ್ತು. ಆದರೆ ಇನ್ನು ಮುಂದೆ ದೆಹಲಿ-ಕತ್ರಾ ನಡುವಿನ ಯಾತ್ರೆಗೆ 8 ಗಂಟೆ ಸಾಕು.

ನಾಳೆಯಿಂದ ಪ್ರಯಾಣಿಕರಿಗೆ ಈ ರೈಲು ಬುಕಿಂಗ್ ಗೆ ಲಭ್ಯ ಎಂದು ರೈಲ್ವೇ ಇಲಾಖೆ ಪ್ರಕಟಣೆ ಹೇಳಿದೆ. ಈ ರೈಲು ಕಾಶ್ಮೀರದ ವೈಷ್ಣೋ ದೇವಿ ದೇವಾಲಯಕ್ಕೆ ಹೋಗುವ ಯಾತ್ರಾರ್ಥಿಗಳ ಸಂಚಾರ ಸುಲಭ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ