ಅಗತ್ಯ ಬಂದರೆ ಗಡಿ ದಾಟಲೂ ಹಿಂದೆ ಮುಂದೆ ನೋಡಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಸೋಮವಾರ, 30 ಸೆಪ್ಟಂಬರ್ 2019 (09:53 IST)
ನವದೆಹಲಿ: ಬಾಲಾಕೋಟ್ ನಲ್ಲಿ ಉಗ್ರ ಚಟುವಟಿಕೆ ಪುನರಾರಂಭಿಸಲು ಕುಮ್ಮಕ್ಕು ನೀಡಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನಾ ನಾಯಕ ಬಿಪಿನ್ ರಾವತ್ ತಕ್ಕ ತಿರುಗೇಟು ನೀಡಿದ್ದಾರೆ.


ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಂದರ್ಶನವೊಂದರಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ಬಂದರೆ ಗಡಿ ರೇಖೆ ದಾಟಲೂ ಹಿಂದೆ ಮುಂದೆ ನೋಡಲ್ಲ ಎಂದಿದ್ದಾರೆ.

ಇನ್ನು ಮುಚ್ಚು ಮರೆ ಏನೂ ಇಲ್ಲ. ಅಗತ್ಯ ಬಂದರೆ ಎಲ್ ಒಸಿ ದಾಟಿ ಮುನ್ನುಗ್ಗುತ್ತೇವೆ. ಅದು ನೆಲದ ಮೂಲಕವಾಗಲೀ ವೈಮಾನಿಕ ದಾಳಿಯಾಗಲೀ ಯಾವುದಕ್ಕೂ ನಾವು ಸಿದ್ಧ ಎಂದು ಜನರಲ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ