ನುಡಿದಂತೆ ನಡೆದ ಅಮಿತಾಭ್ ಬಚ್ಚನ್: ಉತ್ತರ ಪ್ರದೇಶದ ರೈತರ ಸಾಲ ಪಾವತಿ ಮಾಡಿದ ಬಿಗ್ ಬಿ

ಬುಧವಾರ, 21 ನವೆಂಬರ್ 2018 (09:58 IST)
ಲಕ್ನೋ: ಉತ್ತರ ಪ್ರದೇಶದ ರೈತರ ಸಾಲ ಪಾವತಿಸುವೆ ಎಂದಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನುಡಿದಂತೆ ನಡೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಸುಮಾರು 1398 ರೈತರ ಸಾಲವನ್ನು ಪಾವತಿ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಬಿಗ್ ಬಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಇವರ ಪೈಕಿ ಸುಮಾರು 70 ರೈತರನ್ನು ಆಯ್ಕೆ ಮಾಡಿ ಮುಂಬೈಗೆ ಕರೆಸಿಕೊಂಡು ತಾವೇ ಖುದ್ದಾಗಿ ಬ್ಯಾಂಕ್ ಸಾಲ ಪಾವತಿ ಪತ್ರವನ್ನು ನೀಡಲಿದ್ದಾರಂತೆ.

ಇದಕ್ಕೂ ಮೊದಲು ಅಮಿತಾಭ್ ಮಹಾರಾಷ್ಟ್ರದ 350 ರೈತರಿಗೆ ಸಾಲ ಪಾವತಿಸಲು ಸಹಾಯ ಮಾಡಿದ್ದರು. ಉತ್ತರ ಪ್ರದೇಶದ 1398 ರೈತರ ಸಾಲ ಪಾವತಿಸಲು ಅಮಿತಾಭ್ ಸುಮಾರು 4.05 ಕೋಟಿ ರೂ. ವೆಚ್ಚ ಮಾಡಿದ್ದಾರಂತೆ. ಇದರಿಂದ ನನಗೆ ಆತ್ಮ ತೃಪ್ತಿ ಸಿಕ್ಕಿದೆ ಎಂದು ಅವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ