ಇಂದು ದೀಪ ಹಚ್ಚುವ ಮುನ್ನ ಇರಲಿ ಈ ಮುನ್ನೆಚ್ಚರಿಕೆ

ಭಾನುವಾರ, 5 ಏಪ್ರಿಲ್ 2020 (09:33 IST)
ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಲು ಪ್ರಧಾನಿ ಮೋದಿ ಕರೆ ನೀಡಿರುವ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಮುನ್ನ ಈ ಮುನ್ನೆಚ್ಚರಿಕೆಯನ್ನು ತಪ್ಪದೇ ಪಾಲಿಸಿ.


ಕೊರೋನಾದಿಂದ ರಕ್ಷಿಸಿಕೊಳ್ಳಲು ಎಲ್ಲರೂ ಈಗ ಸ್ಯಾನಿಟೈಸರ್ ಬಳಸುತ್ತಿದ್ದಾರೆ. ಆದರೆ ದೀಪ ಹಚ್ಚುವುದಿದ್ದರೆ ಅಪ್ಪಿ ತಪ್ಪಿಯೂ ಸ್ಯಾನಿಟೈಸರ್ ಬಳಸಿ ತಕ್ಷಣವೇ ಅದೇ ಕೈಯಲ್ಲಿ ಹಚ್ಚಬೇಡಿ.

ಸ್ಯಾನಿಟೈಸರ್ ನಲ್ಲಿರುವ ಆಲ್ಕೋಹಾಲ್ ಅಂಶ ಬೆಂಕಿ ಅನಾಹುತ ಸೃಷ್ಟಿಸುವ ಅಪಾಯವಿದೆ. ಇದರಿಂದ ನಿಮ್ಮ ಕೈಗೂ ಗಾಯವಾಗುವ ಅಪಾಯವಿದೆ. ಹೀಗಾಗಿ ಶುದ್ಧ ನೀರಿನಿಂದ ಕೈ ತೊಳೆದುಕೊಂಡು ದೀಪ ಹಚ್ಚಲು ಮರೆಯದಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ