ಪ್ರಧಾನಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಲಾವಿದರಿಂದ ದೇಣಿಗೆ ಸಂಗ್ರಹ ಅಭಿಯಾನ

ಭಾನುವಾರ, 5 ಏಪ್ರಿಲ್ 2020 (09:25 IST)
ಬೆಂಗಳೂರು: ಕೊರೋನಾ ಎಂಬ ಮಹಾಮಾರಿ ವೈರಸ್ ನ್ನು ಹೊಡೆದೋಡಿಸಲು ಸರ್ಕಾರದ ಶ್ರಮಕ್ಕೆ ಕೈ ಜೋಡಿಸಲು ಸ್ಯಾಂಡಲ್ ವುಡ್, ಕನ್ನಡ ಕಿರುತೆರೆ ಕಲಾವಿದರು ಕೈ ಜೋಡಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ, ಸಿಎಂ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಹೊಸ ಅಭಿಯಾನ ಆರಂಭಿಸಿರುವ ಕಲಾವಿದರು ತಮ್ಮ ಸಹ ಕಲಾವಿದರಿಗೆ, ಸ್ನೇಹಿತರಿಗೆ ಚಾಲೆಂಜ್ ನೀಡುವ ಮೂಲಕ ದೇಣಿಗೆ ಸಂಗ್ರಹಿಸಲು ನೆರವಾಗುತ್ತಿದ್ದಾರೆ.

ಈಗಾಗಲೇ ಹಲವು ಕಲಾವಿದರು ಪ್ರಧಾನಿ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಕಿಂಚಿತ್ತು ಮೊತ್ತವೇ ಆದರೂ ತಮ್ಮ ಅಳಿಲು ಸೇವೆಯಿಂದ ಕೊರೋನಾ ವಿರುದ್ಧ ಹೋರಾಡಲು ನೆರವಾಗಲಿದೆ ಎಂಬುದು ಈ ಕಲಾವಿದರ ಆಶಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ