ಚೆನ್ನೈನಲ್ಲಿ ಬಿಜೆಪಿ ಸದಸ್ಯನ ಹತ್ಯೆ!

ಬುಧವಾರ, 25 ಮೇ 2022 (14:58 IST)
ಬಿಜೆಪಿಯ ಎಸ್ಸಿ/ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಬಾಲಚಂದ್ರನ್‌ ಅವರನ್ನು ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಚಿಂತಾಡ್ರಿಪೇಟ್‌ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬಾಲಚಂದ್ರನ್‌ ಅವರಿಗೆ ಭದ್ರತೆ ಕೂಡ ನೀಡಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಚಹಾ ಸೇವನೆಗೆ ಹೋಗಿದ್ದಾಗ ಈ ಹತ್ಯೆ ನಡೆದಿದೆ.
ಬಾಲಚಂದ್ರನ್‌ ಅವರಿಗೆ ಈ ಹಿಂದೆಯೇ ಬೆದರಿಕೆ ಇದ್ದ ಕಾರಣ ಅವರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ‍ ಭದ್ರತಾ ಸಿಬ್ಬಂದಿ ಟೀ ಕುಡಿಯಲು ಹೋದ ಸಮಯ ನೋಡಿಕೊಂಡು ಬೈಕ್‌ ನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ