ಇನ್ಸುರೆನ್ಸ್ ಗಾಗಿ ಕೊಲೆ ಕಥೆ ಕಟ್ಟಿದ ಉದ್ಯಮಿ : ಬಿಗ್ ಟ್ವಿಸ್ಟ್

ಶನಿವಾರ, 10 ಅಕ್ಟೋಬರ್ 2020 (17:14 IST)
ಉದ್ಯಮಿಯೊಬ್ಬ ಇನ್ಸುರೆನ್ಸ್ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳುವ ಸಲುವಾಗಿ ತನ್ನದೇ ಕೊಲೆ ನಡೆದಿದೆ ಎಂದು ಕಥೆ ಕಟ್ಟಿದ್ದಾನೆ.

 

ತನ್ನನ್ನು ಕೊಲೆ ಮಾಡಲಾಗಿದೆ ಎಂದು ಪ್ಲ್ಯಾನ್ ಮಾಡಿ  ಕಥೆ ಕಟ್ಟಿದ ಉದ್ಯಮಿಯೊಬ್ಬ ಜೈಲು ಪಾಲಾದ ಘಟನೆ ನಡೆದಿದೆ.

ಉದ್ಯಮದಲ್ಲಿ ನಷ್ಟ ಹೊಂದಿದ್ದ ವ್ಯಕ್ತಿ ರಾಮ್ ಮೆಹ್ರಾ ಎಂಬಾತ ತನ್ನದೇ ಕಾರಿನಲ್ಲಿ ಶವ ಇಟ್ಟು ಕಾರ್ ಗೆ ಬೆಂಕಿ ಇಟ್ಟು, ಶವ ಸುಟ್ಟಿರುವ ರೀತಿಯಲ್ಲಿ ಚಾಣಾಕ್ಷದಿಂದ ಕಥೆ ಹೆಣೆದಿದ್ದಾನೆ.

ತನಿಖೆ ಆರಂಭಿಸಿದ್ದ ಪೊಲೀಸರಿಗೆ ಉದ್ಯಮಿ ರಾಮ್ 2 ಕೋಟಿ ರೂ.ಗಳ ವಿಮೆ ಮಾಡಿಸಿರುವುದು ತಿಳಿದು ಬಂದಿತು. ಕೊನೆಗೆ ಛತ್ತೀಸ್ ಗಢದಲ್ಲಿದ್ದ ಉದ್ಯಮಿಯನ್ನು ಪತ್ತೆ ಮಾಡಿರುವ ಪೊಲೀಸರು ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ