ಚೀನಾ ಕಾರ್ಮಿಕರಿಗೆ ವೀಸಾ ನೀಡಲು ಲಂಚ: ಕಾರ್ತಿ ಚಿದಂಬರಂಗೆ ಸಿಬಿಐ ಮತ್ತೆ ಶಾಕ್

ಮಂಗಳವಾರ, 17 ಮೇ 2022 (14:38 IST)
ಮಾಜಿ ಕೇಂದ್ರ ಹಣಕಾಸು ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಮಂಗಳವಾರ ದಾಳಿ ನಡೆಸಿದೆ.
ಚೀನಾ ಕೆಲಸಗಾರರಿಗೆ ಅವಕಾಶ ಮಾಡಿಕೊಡಲು ವೀಸಾ ನೀಡಲು ಲಂಚ ಪಡೆದ ಆರೋಪದ ಮೇಲೆ ಕಾರ್ತಿ ಚಿದಂಬರಂ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ತಮಿಳುನಾಡು ಮತ್ತು ಮುಂಬೈನ ಮೂರು ಕಡೆ ಹಾಗೂ ಪಂಜಾಬ್‌ ನಲ್ಲಿ ಒಂದು ಕಡೆ ದಾಳಿ ಮಾಡಲಾಗಿದೆ.
ನನ್ನ ಮೇಲೆ ಎಷ್ಟು ಬಾರಿ ದಾಳಿ ಆಗಿದೆ ಎಂಬುದು ನನಗೆ ಲೆಕ್ಕಕ್ಕೆ ಸಿಗುತ್ತಿಲ್ಲ. ಬಹುಶಃ ದಾಖಲೆಗಳನ್ನು ನೋಡಿ ಹೇಳಬೇಕು ಎಂದು ಕಾರ್ತಿ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ