Shashi Tharoor: ಕಾಂಗ್ರೆಸ್ ಕೊಟ್ಟ ನಾಲ್ಕು ಹೆಸರು ರಿಜೆಕ್ಟ್, ಶಶಿ ತರೂರ್ ಆಯ್ಕೆ ಮಾಡಿದ ಕೇಂದ್ರ
ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ನಿಯೋಗ ರಚಿಸಿದೆ. ಈ ನಿಯೋಗದಲ್ಲಿ ಎಲ್ಲಾ ಪ್ರಮುಖ ಪಕ್ಷಗಳ ಸದಸ್ಯರಿದ್ದಾರೆ. ಇದಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಾಲ್ವರು ಹೆಸರಿನ ಪಟ್ಟಿ ನೀಡಿತ್ತು.
ಆದರೆ ಕೇಂದ್ರ ಸರ್ಕಾರ ಈ ನಾಲ್ವರ ಹೆಸರು ಬಿಟ್ಟು ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದು ಮೋದಿ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ರನ್ನು ಆಯ್ಕೆ ಮಾಡಿದೆ. ಅವರು ಈ ನಿಯೋಗದ ಮುಖ್ಯಸ್ಥರಾಗಿರುತ್ತಾರೆ ಎನ್ನುವುದು ವಿಶೇಷ.
ಕಾಂಗ್ರೆಸ್ ತನ್ನ ಪಕ್ಷದ ವತಿಯಿಂದ ಆನಂದ್ ಶರ್ಮಾ, ಗೌರವ್ ಗೊಗೊಯ್, ಡಾ ಸಯೀದ್ ನಾಸಿರ್ ಹುಸೇನ್ ಮತ್ತು ರಾಜ್ ಬ್ರಾರ್ ಹೆಸರನ್ನು ಮಾತ್ರ ಸೂಚಿಸಿತ್ತು. ಆದರೆ ಈ ನಾಲ್ವರ ಹೆಸರನ್ನೂ ತಿರಸ್ಕರಿಸಿ ಶಶಿ ತರೂರ್ ಗೆ ಅವಕಾಶ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಶಶಿ ತರೂರ್ ಅಲ್ಲದೆ, ಸಂಸದ ಒವೈಸಿ, ಕನ್ನಿಮೊಳಿ, ಸುಪ್ರಿಯಾ ಸುಳೆ ಸೇರಿದಂತೆ ವಿವಿಧ ಪಕ್ಷದ ನಾಯಕರು ಈ ನಿಯೋಗದ ಸದಸ್ಯರಾಗಿದ್ದಾರೆ.