ಗೋವು ರಕ್ಷಣೆಗಾಗಿ ಮುಸ್ಲಿಮರೂ ಪ್ರಾಣ ತ್ಯಾಗ ಮಾಡಿದ್ದಾರೆ: ಭಾಗವತ್

ಶನಿವಾರ, 30 ಸೆಪ್ಟಂಬರ್ 2017 (16:52 IST)
ಗೋವು ರಕ್ಷಣೆಯಲ್ಲಿ ಕೆಲ ಮುಸ್ಲಿಮರು ಕೂಡಾ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ವಿಜಯದಶಮಿ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋ ರಕ್ಷಕರು ತಮ್ಮ ಕರ್ತವ್ಯ ನಿರ್ವಹಿಸುವಾಗ ಕಾನೂನುಬಾಹಿರ ಕೃತ್ಯ ಎಸಗಬಾರದು.ಧರ್ಮವನ್ನು ಮೀರಿ ಗೋವುಗಳ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.   
 
ಸಂವಿಧಾನದಲ್ಲಿಯೇ ಗೋವುಗಳ ರಕ್ಷಣೆ ಉಲ್ಲೇಖವಾಗಿದೆ. ಗೋವು ರಕ್ಷಣೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಮುಸ್ಲಿಂ ಸಮುದಾಯದವರು ಕೂಡಾ ಗೋವು ರಕ್ಷಣೆಯಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
 
ಗೋವು ರಕ್ಷಕರು ಕೆಲವರನ್ನು ಹತ್ಯೆ ಮಾಡಿದ್ದಾರೆ ಎನ್ನುವ ವರದಿಗಳಿವೆ. ಯಾವುದೀ ರೀತಿಯ ಹಿಂಸಾಚಾರ ಸರಿಯಲ್ಲ. ಗೋವುಗಳ ಕಳ್ಳಸಾಗಾಣೆ ಮಾಡುವವರು ಅನೇಕ ಜನರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಧರ್ಮವನ್ನು ಹೊರತುಪಡಿಸಿ ಗೋಮಾತೆಯ ರಕ್ಷಣೆಗೆ ಮುಂದಾಗಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ