ಮನೀಶ್ ಮಂಡಲ್, ಅಮಿತ್ ಜಾ ಮತ್ತು ಮನೋಜ್ ಕುಮಾರ್ ಎಂಬ ಮೂವರು ದುಷ್ಕರ್ಮಿಗಳು ಮುಂಗರ್ ಜಿಲ್ಲೆಯ ಜಮಲ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೇಶೋಪುರ್ನಿಂದ 10 ವರ್ಷದ ಬಾಲಕನನ್ನು ಅಪಹರಿಸಿ ಆತನ ಪೋಷಕರಿಂದ ಹಣದ ಬೇಡಿಕೆಯನ್ನಿಟ್ಟಿದ್ದರು. ಆದರೆ ಕೇಳಿದ್ದಷ್ಟು ಹಣ ಕೈಗೆ ಬರದಿದ್ದಾಗ ಮಗುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿ ಕೊಂದು ಹಾಕಿದ್ದರು. 2012ರಲ್ಲಿ ಈ ಘಟನೆ ನಡೆದಿತ್ತು.